ಪ್ರವಾಸಕ್ಕೆಂದು ಹೋಗಿದ್ದ ಒಂದೇ ಕುಟುಂಬದ ಆರು ಜನರು ನೀರು ಪಾಲು.ಮೃತರು ಹುಬ್ಬಳ್ಳಿ ಮೂಲದ ಈಶ್ಬರ ನಗರದ ನಿವಾಸಿಗಳು.

Share to all

ಪ್ರವಾಸಕ್ಕೆಂದು ಹೋಗಿದ್ದ ಒಂದೇ ಕುಟುಂಬದ ಆರು ಜನರು ನೀರು ಪಾಲು.ಮೃತರು ಹುಬ್ಬಳ್ಳಿ ಮೂಲದ ಈಶ್ಬರ ನಗರದ ನಿವಾಸಿಗಳು.

ಹುಬ್ಬಳ್ಳಿ:-ಪ್ರವಾಸಕ್ಕೆಂದು ಹೋಗಿದ್ದ ಆರು ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಅಕ್ವಾಡ ಗ್ರಾಮದ ಕಾಳಿ ನದಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಈಶ್ವರ ನಗರದ ನಿವಾಸಿಗಳಾದ ನಜೀರ್ ಅಹ್ಮದ್(40) ಅಲ್ಜಿಯಾ ಅಹ್ಮದ (10) ಮೋಗಿನ್ ಅಹ್ಮದ್ (6) ರೇಷ್ಮಾ ಉನ್ನೀಷಾ (38) ಇಪ್ರಾ ಅಹ್ಮದ (15) ಅಬೀದ್ ಅಹ್ಮದ (12) ಮೃತರಾಗಿದ್ದು ಇಬ್ಬರು ಸುರಕ್ಷಿತರಾಗಿದ್ದಾರೆ.

ಮೃತರೆಲ್ಲರೂ ಒಂದೇ ಕುಟುಂಬದವರಾಗಿದ್ದು,ಎಂಟು ಜನರು ವಾಹನ ಮಾಡಿಕೊಂಡು ರಜೆಯಲ್ಲಿ ಮಜಾ ಮಾಡಲು ದಾಂಡೇಲಿಗೆ ತೆರಳಿದ್ದರು. ನದಿಯಲ್ಲಿ ಈಜಲು ಹೋಗಿ ಮುಳುಗಿ ಸಾವನ್ನಪ್ಪಿದ್ದಾರೆ.

ಮೃತ ದೇಹಗಳನ್ನು ದಾಂಡೇಲಿ ಪೋಲೀಸರು ಹೊರ ತೆಗೆದು ಮರಣೋತ್ತರ ಪರೀಕ್ಷಗೆ ಆಸ್ಪತ್ರೆಗೆ ಕಳಿಸಿದ್ದು,ದಾಂಡೇಲಿ ಪೋಲೀಸ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author