ಹುಬ್ಬಳ್ಳಿಸಿಲಿಂಡರ್ ಸೋರಿಕೆ ಪ್ರಕರಣ,.ಅಯ್ಯಪ್ಪನ ಪಾದ ಸೇರಿದ ಇಬ್ಬರು ಮಾಲಾಧಾರಿಗಳು..ಫಲಿಸಲಿಲ್ಲಾ ಸಂತೋಷ ಲಾಡ್ ಪ್ರಯತ್ನ.
ಹುಬ್ಬಳ್ಳಿ:-ಹುಬ್ಬಳ್ಳಿಯ ಉಣಕಲ್ಲ ಗ್ರಾಮದಲ್ಲಿ ಸಿಲೆಂಡರ ಸೋರಿಕೆಯಾಗಿ ತೀವ್ರವಾಗಿ ಗಾಯಗೊಂಡಿದ್ದ ಒಂಬತ್ತು ಮಾಲಾದಾರಿಗಳಲ್ಲಿ ಇಬ್ಬರು ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾರೆ.
ಕಳೆದ ಮೂರು ದಿನಗಳಿಂದ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ನಡೆಯುತ್ತಿದ್ದ ಚಿಕಿತ್ಸೆಗೆ ಸ್ಪಂದಿಸದೆ ಇಬ್ಬರ ಮಾಲಾಧಿಗಾರಿಗಳು ಕೊನೆಯುಸಿರೆಳೆದಿದ್ದಾರೆ.
ನಿಜಲಿಂಗಪ್ಪ ಬೇಪುರಿ(58), ಸಂಜಯ ಸವದತ್ತಿ (18) ಮೃತ ಮಾಲಾಧಿಗಾರಿಗಳಾಗಿದ್ದಾರೆ.
ಇನ್ನುಳಿದ ಏಳು ಅಯ್ಯಪ್ಪ ಮಾಲಾಧಿಗಾರಿಗಳಿಗೆ ಚಿಕಿತ್ಸೆ ಮುಂದುವರಿದಿದಿ.
ಮಾಲಾಧಿಗಾರಿಗಳ ಜೀವ ಉಳಿಸಿಕೊಳ್ಳಲು ನಾನಾ ರೀತಿಯ ಕಸರತ್ತು ಮಾಡಿದ್ದ ಕಿಮ್ಸ್ ಆಸ್ಪತ್ರೆಯ ಸಿಬ್ಬಂದಿಗಳು ಪ್ರಯತ್ನ ಪಟ್ಟಿದ್ದರು ಅಲ್ಲದೇ
ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಬೆಂಗಳೂರಿನಿಂದ ತಜ್ಞ ವೈದ್ಯರನ್ನ ಸಚಿವ ಸಂತೋಷ ಲಾಡ್ ಮತ್ತು ಸರ್ಕಾರ ಪ್ರಯತ್ನ ಪಟ್ಟಿತ್ತು.
ಆದ್ರೆ ದುರಾದೃಷ್ಟವಶಾತ್ ಬದುಕುಳಿಯಲಿಲ್ಲ ಇಬ್ಬರು ಅಯ್ಯಪ್ಪ ಮಾಲಾಧಿಗಾರಿಗಳು.