ಶ್ರೀಕಾಂತ ಪೂಜಾರಿ ಬಂಧನದ ವಿಷಯದಲ್ಲಿ ಸರಕಾರ ಎಳ್ಳಷ್ಟು ತಪ್ಪುಮಾಡಿಲ್ಲಾ.ಬಂಧಿಸಿದ ಪೋಲೀಸ ಇನಸ್ಪೆಕ್ಟರ್ ಮೇಲೆ ಕ್ರಮದ ಅಗತ್ಯ ಇಲ್ಲಾ ಕೋನರೆಡ್ಡಿ.
ಹುಬ್ಬಳ್ಳಿ:-ಬಂಧಿತ ಶ್ರೀಕಾಂತ ಪೂಜಾರಿ ವಿಚಾರದಲ್ಲಿ ಸರಕಾರ ಕೋಟ್೯ಗೆ ನಿರ್ಧೇಶನ ಕೊಡಲು ಬರುತ್ತದೆಯಾ.ಕೋಟ್೯ ನಿರ್ಧೇಶನದಂತೆ ಪೋಲೀಸರು ನಡೆದು ಕೊಂಡಿದ್ದಾರೆ ಎಂದು ಶಾಸಕ ಎನ್ ಎಚ್ ಕೋನರೆಡ್ಡಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಕೋನರೆಡ್ಡಿ ಶ್ರೀಕಾಂತ ಪೂಜಾರಿ ಬಂಧನದ ವಿಚಾರದಲ್ಲಿ ಸರ್ಕಾರ ಎಳ್ಳಷ್ಟು ತಪ್ಪು ಮಾಡಿಲ್ಲಾ.ಬಂಧಿಸಿದ ಇನಸ್ಪೆಕ್ಟರ್ ಮೇಲೆ ಕ್ರಮದ ಅಗತ್ಯ ಇಲ್ಲಾ ಎಂದು ಇನಸ್ಪೆಕ್ಟರ್ ಪರ ಕೋನರೆಡ್ಡಿ ಬ್ಯಾಟಿಂಗ್ ಮಾಡಿದ್ದಾರೆ.
ಬಿಜೆಪಿ ಶ್ರೀಕಾಂತ ಪೂಜಾರಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ.ಈ ರೀತಿ ಮಾಡಿದರೆ ಓಟ್ ಬರುತ್ತವೆ ಅಂತಾ ಅಂದು ಕೊಂಡಿದ್ದಾರೆ.ಜನ ಸಹ ಎಲ್ಲವನ್ನೂ ಗಮನಿಸುತ್ತಿದ್ದಾರೆ.ಬಿಜೆಪಿಗೆ ಹುಬ್ಬಳ್ಳಿ ಅಭಿವೃದ್ಧಿ ಬೇಕಾಗಿಲ್ಲಾ.ಪದೇ ಪದೇ ಈ ರೀತಿಯ ಗಲಾಟೆಗಳು ಆದರೆ ಯಾವ ಉದ್ಯಮಿಯೂ ಬರುವುದಿಲ್ಲಾ ಎಂದು ಶಾಸಕ ಕೋನರೆಡ್ಡಿ ಕಿಡಿಕಾರಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ.