ಟೆಂಪಲ್ ರನ್ ಮಾಡಿದ ಮಾಜಿ ಶಾಸಕ ಅಮೃತ ದೇಸಾಯಿ –ಯುವಮಿತ್ರರು ಮುಖಂಡರೊಂದಿಗೆ ವಿವಿಧ ದೇವಸ್ಥಾನಗಳಿಗೆ ತೆರಳಿ ದೇವಾನುದೇವತೆಗಳ ಆಶೀರ್ವಾದ ಪಡೆದುಕೊಂಡ ಧಣಿ

Share to all

ಟೆಂಪಲ್ ರನ್ ಮಾಡಿದ ಮಾಜಿ ಶಾಸಕ ಅಮೃತ ದೇಸಾಯಿ –ಯುವಮಿತ್ರರು ಮುಖಂಡರೊಂದಿಗೆ ವಿವಿಧ ದೇವಸ್ಥಾನಗಳಿಗೆ ತೆರಳಿ ದೇವಾನುದೇವತೆಗಳ ಆಶೀರ್ವಾದ ಪಡೆದುಕೊಂಡ ಧಣಿ

ಧಾರವಾಡ –

ಹೌದು ಆಯುಧ ಪೂಜೆ ಮತ್ತು ಮಹಾನವಮಿ ಹಿನ್ನಲೆಯಲ್ಲಿ ಮಾಜಿ ಶಾಸಕ ಅಮೃತ ದೇಸಾಯಿ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದರು.ಧಾರವಾಡದ ವಿವಿಧ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆಯನ್ನು ಸಲ್ಲಿಸಿ ದೇವಾನು ದೇವತೆಗಳ ದರ್ಶನವನ್ನು ಪಡೆದುಕೊಂಡರು.ಆಯುಧ ಪೂಜೆ ಮತ್ತು ಮಹಾನವಮಿ ಹಿನ್ನಲೆಯಲ್ಲಿ ಈ ಒಂದು ಟೆಂಪಲ್ ರನ್ ನ್ನು ಮಾಜಿ ಶಾಸಕ ಅಮೃತ ದೇಸಾಯಿ ಮಾಡಿದರು.ಆಯುಧಪೂಜಾ ಹಾಗೂ ಮಹಾನವಮಿಯ ಅಂಗವಾಗಿ ಧಾರವಾಡ ಶಹರದ ಕಿಲ್ಲಾ ದುರ್ಗಾದೇವಿ ದೇವಸ್ಥಾನ, ಹೊಸಯಲ್ಲಾಪುರದ ಬನಶಂಕರಿ ದೇವಸ್ಥಾನ ಹಾಗೂ ನಗರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿಯ ಆಶೀರ್ವಾದ ಪಡೆದುಕೊಂಡರು. ಈ ಒಂದು ಸಂಧರ್ಭದಲ್ಲಿ ಅನೇಕ ಪ್ರಮುಖರು ಹಾಗೂ ಯುವಮಿತ್ರರು ಉಪಸ್ಥಿತರಿದ್ದರು.ಇದರೊಂದಿಗೆ ಮಾಜಿ ಶಾಸಕ ಅಮೃತ ದೇಸಾಯಿ ಟೆಂಪಲ್ ರನ್ ಮಾಡುತ್ತಾ ಮತ್ತೆ ಆಕ್ಟೀವ್ ಆಗಿದ್ದಾರೆ.

ಉದಯ ವಾರ್ತೆ ಧಾರವಾಡ


Share to all

You May Also Like

More From Author