ಸ್ವಂತ ಹಣವನ್ನ ಮನೆ ಬಿದ್ದವರಿಗೆ ಮತ್ತು ರೈತರ ಅಕೌಂಟ್‌ಗೆ ಹಾಕಿದ್ರೇ, ಮನೆ ಮನೆಯಲ್ಲಿ ಕೋನರೆಡ್ಡಿಯವರ ಭಾವಚಿತ್ರ ಹಾಕಿಸುವೆ ಮುನೇನಕೊಪ್ಪ..*

Share to all

*ಮುನೇನಕೊಪ್ಪ ಅವರ ಒತ್ತಡಕ್ಕೆ ಮಣಿದು ಚೆಕ್ ವಿತರಿಸಿದ ತಾಲೂಕಾಡಳಿತ*

*ಹೋರಾಟ ನಡೆಸಿ ಸ್ಥಳದಲ್ಲೇ ನ್ಯಾಯ ಒದಗಿಸಿದ ಬಿಜೆಪಿ*

*ಸ್ವಂತ ಹಣವನ್ನ ಮನೆ ಬಿದ್ದವರಿಗೆ ಮತ್ತು ರೈತರ ಅಕೌಂಟ್‌ಗೆ ಹಾಕಿದ್ರೇ, ಮನೆ ಮನೆಯಲ್ಲಿ ಕೋನರೆಡ್ಡಿಯವರ ಭಾವಚಿತ್ರ ಹಾಕಿಸುವೆ*

ನವಲಗುಂದ: ನಿರಂತರ ಮಳೆಯಿಂದ ತತ್ತರಿಸಿ ಹೋಗಿರುವ ನವಲಗುಂದ ವಿಧಾನಸಭಾ ಕ್ಷೇತ್ರದ ಜನರಿಗಾಗಿ ಭಾರತೀಯ ಜನತಾ ಪಕ್ಷ ಇಂದು ಬೃಹತ್ ಹೋರಾಟ ನಡೆಸಿ, ತಾಲೂಕು ಆಡಳಿತ ಮತ್ತು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನವಲಗುಂದ ಪಟ್ಟಣದ ರೈತ ಭವನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ತಹಶೀಲ್ದಾರ ಕಚೇರಿಯವರೆಗೆ ಸರಕಾರದ ವಿರುದ್ಧ ಘೋಷಣೆ ಕೂಗುತ್ತ ನಡೆಸಲಾಯಿತು.

ತಹಶೀಲ್ದಾರ ಕಚೇರಿ ಎದುರಿಗೆ ಜಮಾಯಿಸಿದ ಕಾರ್ಯಕರ್ತರ ಸಮ್ಮುಖದಲ್ಲಿ ಅಧಿಕಾರಿಗಳನ್ನ ಬೆವರಿಳಿಸಿದ ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು, ಮನೆ ಬಿದ್ದು ಮರಣ ಹೊಂದಿದರೇ ಎಷ್ಟು ದಿನದಲ್ಲಿ ಪರಿಹಾರ ನೀಡಬೇಕು. ಮನೆ ಬಿದ್ದ ಸಮಯದಲ್ಲಿ ನೀಡಬೇಕಾದ ಪರಿಹಾರ ಎಲ್ಲಿದೆ ಎಂದು ಪ್ರಶ್ನಿಸಿದರು.
ಮಾಜಿ ಸಚಿವರ ಮಾತಿನಿಂದ ಕಂಗಾಲಾದ ತಹಶೀಲ್ದಾರ ಸಾವುಕಾರ್, ತಕ್ಷಣವೇ ಚೆಕ್ ನೀಡುವ ಭರವಸೆ ನೀಡಿದರು. ಇದಕ್ಕೆ ಒಪ್ಪದ ಪ್ರತಿಭಟನಾನಿರತರು, ಚೆಕ್ ವಿತರಣೆ ಮಾಡುವವರೆಗೆ ಇಲ್ಲಿಂದ ಕದಲುವುದಿಲ್ಲವೆಂದು ಎಚ್ಚರಿಸಿದ ನಂತರ, ಹನಸಿಯ ಮೃತ ಮಂಗಳಾ ಪಾಟೀಲ ಅವರ ಕುಟುಂಬದವರಿಗೆ ಚೆಕ್ ವಿತರಣೆ ಮಾಡಲಾಯಿತು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ಮಾತನಾಡಿ, ತಮ್ಮ ಪಕ್ಷ ಅಧಿಕಾರದಲ್ಲಿದ್ದ ಸಮಯದಲ್ಲಿ ಮನೆ ಬಿದ್ದರೇ ತಕ್ಷಣವೇ ಹಣವನ್ನ ನೀಡಲಾಗುತ್ತಿತ್ತು. ಮರಣ ಹೊಂದಿದರೇ 24 ಗಂಟೆಯಲ್ಲಿ ಪರಿಹಾರ ನೀಡಲಾಗುತ್ತಿತ್ತು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಪರಿಹಾರ ಕೊಡದೇ ದಿನಗಳನ್ನ ಮುಂದೂಡಲಾಗುತ್ತಿದೆ. ರೈತಾಪಿ ಜನರಿಗೆ ಆಗಿರುವ ಬೆಳೆ ಹಾನಿಗೆ ಪರಿಹಾರ ನೀಡಬೇಕು. ಮನೆ ಬಿದ್ದು ಸಾವಿಗೀಡಾದ ಮಂಗಳಾ ಪಾಟೀಲ ಕುಟುಂಬಕ್ಕೆ 25ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಹಾಲಿ ಶಾಸಕರು ರಸ್ತೆಯನ್ನ ಸ್ವಂತ ದುಡ್ಡಿಂದ ಮಾಡ್ತೇನಿ ಅಂತಿದ್ರು. ಅದನ್ನ ಬಿಟ್ಟು ಬೆಳೆಹಾನಿ ರೈತನ ಕುಟುಂಬ ಹಾಗೂ ಮನೆ ಬಿದ್ದವರ ಅಕೌಂಟ್ ಸ್ವಂತ ಹಣ ಹಾಕಿದರೇ, ನಾನೇ ನಮ್ಮ ಪಕ್ಷದ ಅಧ್ಯಕ್ಷರ ಕಡೆಯಿಂದ ಕೋನರೆಡ್ಡಿಯವರ ಭಾವಚಿತ್ರ ಹಾಕಿಸುತ್ತೇನೆ ಎಂದು ಸವಾಲು ಹಾಕಿದರು.
ಮತ್ತೆ ನಾವು ತಹಶೀಲ್ದಾರ ಕಚೇರಿಗೆ ಬರದಂತೆ ನೋಡಿಕೊಳ್ಳುವುದು ತಾಲೂಕಾಡಳಿತದ ಮೇಲಿದೆ. ಕ್ಷೇತ್ರದ ಜನರಿಗೆ ಅನ್ಯಾಯವಾದರೇ, ಬಿಜೆಪಿ ಯಾವತ್ತೂ ಸುಮ್ಮನೆ ಕೂಡುವುದಿಲ್ಲವೆಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ತಾಲೂಕ ಅಧ್ಯಕ್ಷ ಗಂಗಪ್ಪ ಮನಮಿ, ಯಲ್ಲಪ್ಪ ಗಣಿ, ಎ.ಬಿ.ಹಿರೇಮಠ, ಶರಣಪ್ಪಗೌಡ ದಾನಪ್ಪಗೌಡ್ರ, ಷಣ್ಮುಖ ಗುರಿಕಾರ, ಶಂಕರಗೌಡ ಬಾಳನಗೌಡ್ರ, ಸಿದ್ದಣ್ಣ ಕೆಟಗೇರಿ, ಸಿದ್ಧನಗೌಡ ಪಾಟೀಲ,ರುದ್ರಪ್ಪ ದುಂದೂರ, ಮಲ್ಲಪ್ಪ ಹಳಕಟ್ಟಿ, ಪಕ್ಕಿರಪ್ಪ ಜಕ್ಕಪ್ಪಣವರ, ಶಿವಣ್ಣ ಚಿಪ್ಪಾಡಿ, ಅಣ್ಣಪ್ಪ ಬಾಗಿ, ಮಹಾಂತೇಶ ಕಲಾಲ, ವಜ್ರಗೌಡ ಪಾಟೀಲ, ಶಂಕ್ರಣ್ಣ ತೋಟದ, ಗೌಡಪ್ಪಗೌಡ ಪಾಟೀಲ, ಈರಪ್ಪ ಕರಣಿ, ಶೇಖರಗೌಡ ಪಾಟೀಲ, ಶರಣಪ್ಪ ಮಾದರ, ದುರ್ಗಪ್ಪ ಮಾದರ, ಷಣ್ಮುಖಪ್ಪ ಕುಲಕರ್ಣಿ, ಪರ್ವತಪ್ಪ ಬೆಣ್ಣಿ, ಕೃಷ್ಣ ಮಾದರ, ಈರಣ್ಣ ಹಸಬಿ, ಸಂಗನಗೌಡ, ಗುರುನಾಥಗೌಡ ಉಳ್ಳಾಗಡ್ಡಿ, ಶೇಖಪ್ಪ ಬಕ್ಕಣ್ಣವರ, ಶಿವಕುಮಾರ ಬಳಿಗೇರ, ದೇವರಾಜ ಕರಿಯಪ್ಪನವರ, ಸಂತೋಷ ನಾವಳ್ಳಿ, ವಿನಾಯಕ ದಾಡಿಬಾವಿ, ಬಸವರಾಜ ಕಾತರಕಿ, ಶಂಕರ ಯಾದವಾಡ, ಪ್ರವೀಣ ಮಾವಿನಕಾಯಿ, ಐ.ಡಿ,ಪ್ರಭು, ಆನಂದ ಜಕ್ಕನಗೌಡ್ರ, ಮಂಜು ಉಡಿಕೇರಿ, ಮಂಜು ಅಕ್ಕಿ, ಸಂಗನಗೌಡ ಹುಡೇದ, ವಿರೇಶ ಅಂಗಡಿ, ಮೊಹಮ್ಮದ ಬಿಜಾಪುರ, ಅರುಣ ಮೆಣಸಿನಕಾಯಿ, ಚಂದ್ರು ಕರ್ಲವಾಡ, ರೋಹಿತ ಮತ್ತಿಹಳ್ಳಿ, ಪ್ರಭು ಬುಳಗಣ್ಣವರ, ಸೋಮು ಪಟ್ಟಣಶೆಟ್ಟಿ, ಕಲ್ಲಪ್ಪ ಗಿಡ್ಡಣ್ಣವರ, ಮಲ್ಲನಗೌಡ ಪಾಟೀಲ, ಟೆಂಗಿನಕಾಯಿ, ಯಡ್ರಾವಿ, ದಾಡಿಬಾವಿ, ಜಯಪ್ರಕಾಶ ಬಾದಾಮಿ, ಗಂಗಣ್ಣ ದುಂದೂರ, ರವಿಕುಮಾರ ಸವದತ್ತಿ, ಪವನ ಪಾಟೀಲ ಸೇರಿದಂತೆ ರೈತ ಬಾಂಧವರು, ಹಾಗೂ ಗುರು ಹಿರಿಯರು, ಯುವಕರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಉದಯ ವಾರ್ತೆ
ನವಲಗುಂದ


Share to all

You May Also Like

More From Author