ನನ್ನ ಮೈ ಮುಟ್ರೆ ನಂಗೆ ಆಗಲ್ಲ: ಧನರಾಜ್ ಗೆ ಮುಟ್ಟಿನೋಡಿಕೊಳ್ಳುವಂತೆ ಹೇಳಿದ ಗೌತಮಿ!

Share to all

ಸತ್ಯ ಧಾರವಾಹಿ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿರುವ ಗೌತಮಿ ಅವರು ಬಿಗ್ ಬಾಸ್ ಮನೆಯಲ್ಲಿ ಪಾಸಿಟಿವಿಟಿಯಿಂದಾಗಿ ಗುರುತಿಸಿಕೊಂಡಿದ್ದಾರೆ. ಆದ್ರೆ ಎಲ್ಲಾ ಸಂದರ್ಭಗಳಲ್ಲೂ ಇದು ಸಾಧ್ಯವಿಲ್ಲ. ಧನರಾಜ್​ ಅವರ ವರ್ತನೆಯೊಂದನ್ನು ಖಂಡಿಸಿದ್ದು, ಇದೇ ಅವರು ಎಲಿಮಿನೇಶನ್​ಗೆ ನಾಮಿನೇಟ್​ ಆಗುವಂತೆ ಮಾಡಿದೆ.

ಬಿಗ್ ಬಾಸ್​ ಮನೆಯಲ್ಲಿ ಸಾಂಗ್ಸ್​​ ಅಲರಾಮ್​​ ಇದ್ದಂತೆ. ಬೆಳಗ್ಗೆ ಹಾಡು ಹಾಕಿದಾಗ ಹೆಚ್ಚಿನವರು ಸಖತ್​ ಸ್ಟೆಪ್​ ಹಾಕುತ್ತಾರೆ. ಆದ್ರೆ ಕಳೆದ ದಿನ ಗೌತಮಿ ಬೆಡ್​ ಬಿಟ್ಟಿರಲಿಲ್ಲ. ಇನ್ನೇನು ಎದ್ದು ಬರಬೇಕು ಅನ್ನುವಷ್ಟರಲ್ಲಿ ಧನರಾಜ್​ ಅವರು ಗೌತಮಿ ಅವರಿಗೆ ಪಿಲ್ಲೋ ಇಂದ ಹೊಡೆಯುತ್ತಾರೆ. ಇದು ಗೌತಮಿ ಅವರಿಗೆ ಕಿರಿಕಿರಿ ಉಂಟು ಮಾಡಿದೆ. ನನಗಿದು ಇಷ್ಟ ಆಗಲಿಲ್ಲ. ಮೊದಲ ಬಾರಿ ಅಂತಾ ಸುಮ್ಮನಿದ್ದೇನೆ. ದಯವಿಟ್ಟು ನನ್ನನ್ನು ಈ ರೀತಿ ಎಬ್ಬಿಸಬೇಡಿ.

ಸಾಂಗ್​ ಪ್ಲೇ ಆದಾಗ ಏಳಬೇಕೆಂಬುದು ನನಗೂ ಗೊತ್ತು ಎಂದು ತಿಳಿಸಿದ್ದಾರೆ. ಇದು ಧನರಾಜ್​ಗೆ ಅಚ್ಚರಿ ಉಂಟುಮಾಡಿದೆ. ನಾಮಿನೇಷನ್​ನಲ್ಲಿ ಇದೇ ಕಾರಣ ಕೊಟ್ಟು ಧನರಾಜ್​ ಅವರು ಗೌತಮಿ ಅವರನ್ನು ನಾಮಿನೇಟ್​​ ಮಾಡಿದ್ದಾರೆ. ಇದರಿಂದ ಅಸಮಾಧಾನಗೊಂಡ ಗೌತಮಿ ‘ನಾನು ಪಾಸಿಟಿವಿಟಿ’ ಅನ್ನೋದನ್ನು ಮರೆತುಬಿಡಿ ಎಂದು ತಿಳಿಸಿದ್ದಾರೆ


Share to all

You May Also Like

More From Author