ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂದು ಹಣಾಹಣಿ. ಭಾರತ ಗೆದ್ದು ಬರಲಿ ಎಂದು ಕರವೇ ಯಿಂದ ಪೂಜೆ..
ಹುಬ್ಬಳ್ಳಿ:-ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂದು ಹಣಾಹಣಿ ನಡೆಯಲಿರುವ ಹಿನ್ನೆಲೆಯಲ್ಲಿ
ಭಾರತ ಗೆದ್ದು ಬರಲಿ ಎಂದು ಕರವೇ (ಪ್ರವೀಣ ಶೆಟ್ಟಿ ಬಣ)ದಿಂದ ಪೂಜೆ ಸಲ್ಲಿಸಲಾಯಿತು..
ಹುಬ್ಬಳ್ಳಿಯ ಶ್ರೀ ಸತ್ಯಸಾಯಿಬಾಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಕರವೇ… ಚಾಂಪಿಯನ್ ಟ್ರೋಫಿ ನಮ್ಮ ದೇಶದ ಮಡಿಲಿಗೆ ಬರುತ್ತದೆ.ರೋಹಿತ ಶರ್ಮಾ ನಾಯಕತ್ವಕ್ಕೆ ಜಯವಾಗುತ್ತದೆ.ಭಾರತದ ಪ್ರತಿಯೊಬ್ಬ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ,ಇವತ್ತು ನೂರಕ್ಕೆ ನೂರರಷ್ಟು ಭಾರತ ಗೆಲ್ಲತ್ತೆ ಆಲ್ ದಿ ಬೆಸ್ಟ್ ಎಂದು ಕರವೇ ಮುಖಂಡ ಮಂಜುನಾಥ ಲೂತಿಮಠ ಹೇಳಿದ್ದಾರೆ.
ಈ ಒಂದು ಕಾರ್ಯಕ್ರಮದಲ್ಲಿ ಪ್ರವೀಣ ಗಾಯಕವಾಡ.ಅಮಿತ್ ನರವಟೆ.ಚಿದಾನಂದ ಸವದತ್ತಿ.ಮಂಜು ಹಾಗೂ ಮುಂತಾದವರು ಭಾಗವಹಿಸಿದ್ದರು.