ರವಿಕುಮಾರ ಬಡ್ನಿ ತೆಲಂಗಾಣ ಚುನಾವಣೆ ಉಸ್ತುವಾರಿ.ಒಂದು ವಾರದಿಂದ ತೆಲಂಗಾಣದಲ್ಲಿ ಯುವ ನಾಯಕ.
ತೆಲಂಗಾಣ:-ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಕಾಂಗ್ರೆಸ್ ಪಕ್ಷ ತೆಲಂಗಾಣದಲ್ಲೂ ಕಾಂಗ್ರೆಸ್ ಬಾವುಟ ಹಾರಿಸಲು ಕಸರತ್ತು ನಡೆಸಿದೆ.
ಆ ಹಿನ್ನೆಲೆಯಲ್ಲಿ ರಾಜ್ಯದಿಂದ ಪಕ್ಷ ಸಂಘಟನೆ ಮತ್ತು ವಾಕ್ ಚಾತುರ್ಯ ಇರುವ ಯುವ ಮುಖಂಡರನ್ನು ಆಯ್ಕೆ ಮಾಡಿ ತೆಲಂಗಾಣ ಚುನಾವಣೆ ಪ್ರಚಾರಕ್ಕೆ ಕಾಂಗ್ರೆಸ್ ಹೈಕಮಾಂಡ ಕಳಿಸಿದೆ.
ಆ ಒಂದು ತಂಡದಲ್ಲಿ ಹುಬ್ಬಳ್ಳಿಯ ಭರವಸೆಯ ಯುವ ನಾಯಕ ರವಿಕುಮಾರ ಬಡ್ನಿ ಅವರನ್ನು ತೆಲಂಗಾಣ ರಾಜ್ಯದ ನಾಗರ ಕರ್ನೂಲ್ ವಿಧಾನಸಭಾ ಕ್ಷೇತ್ರದ ಮಂಡಲ ಉಸ್ತುವಾರಿಯಾಗಿ ಆಯ್ಕೆ ಮಾಡಿ ಕಳಿಸಿದೆ.
ಆ ಹಿನ್ನೆಲೆಯಲ್ಲಿ ರವಿಕುಮಾರ ಬಡ್ನಿ ಅವರು ಕಳೆದ ಒಂದು ವಾರದಿಂದ ನಾಗರ ಕರ್ನೂಲ್ ವಿಧಾನಸಭಾ ಕ್ಷೇತ್ರದ ಅಬ್ಯೆರ್ಥಿಯಾದ ಡಾ:ಕುಚಕುಲಾ ರೆಡ್ಡಿ ಅವರೊಂದಿಗೆ ಬಿ ಎಲ್ ಓ ಹಾಗೂ ಭೂತ ಮಟ್ಟದ ಪಧಾಧಿಕಾರಗಳ ಸಭೆಯಲ್ಲಿ ಪಾಲ್ಗೊಂಡು ಪಕ್ಷ ವಹಿಸಿದ ಜಾವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.
ಉದಯ ವಾರ್ತೆ ತೆಲಂಗಾಣ