ಶಾಲಾ ಬಸ್ ಟ್ರ್ಯಾಕ್ಟರ್ ಡಿಕ್ಕಿ:ನಾಲ್ವರು ವಿದ್ಯಾರ್ಥಿಗಳ ಸಾವು.ಹಲವರಿಗೆ ಗಾಯ.
ಬಾಗಲಕೋಟೆ: ಶಾಲಾ ವಾಹನ ಮತ್ತು ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಜರುಗಿದೆ.ಅಲ್ಲದೇ ಎಂಟು ಮಕ್ಕಳಿಗೆ ಗಾಯಗಳಾಗಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಅಲಗೂರ ಗ್ರಾಮದ ಹತ್ತಿರ ಮಧ್ಯರಾತ್ರಿ 12 ಗಂಟೆಗೆ ನಡೆದಿದೆ. ವಿದ್ಯಾರ್ಥಿನಿ ಸೇರಿದಂತೆ ನಾಲ್ವರು ಮಕ್ಕಳು ಸ್ಥಳದಲ್ಲಿಯೇ ಮೃತಪಟ್ಟಿದ್ದು,
ಮೃತರು ವರ್ಧಮಾನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು. ಸಾಗರ ಕಡಕೋಳ(17), ಶ್ವೇತಾ(13), ಗೋವಿಂದ(13) ಬಸವರಾಜ(17) ಮೃತಪಟ್ಟ ವಿದ್ಯಾರ್ಥಿಗಳು. ಘಟನೆಯಲ್ಲಿ ಎಂಟು ಮಕ್ಕಳು ಗಾಯಗೊಂಡಿದ್ದಾರೆ.