ಬೆಳ್ಳಂ ಬೆಳೆಗ್ಗೆ ಜವರಾಯನ ಅಟ್ಟ ಹಾಸ.ದೇವರಿಗೆ ಹೋದವರು ದೇವರ ಪಾದ ಸೇರಿದ ಒಂದು ಡಜನ್ ಜನರು.

Share to all

ಬೆಳ್ಳಂ ಬೆಳೆಗ್ಗೆ ಜವರಾಯನ ಅಟ್ಟ ಹಾಸ.ದೇವರಿಗೆ ಹೋದವರು ದೇವರ ಪಾದ ಸೇರಿದ ಒಂದು ಡಜನ್ ಜನರು.

ಹಾವೇರಿ:- ನಿಂತಿದ್ದ ಲಾರಿಗೆ ಟಿಟಿ ವಾಹನ ಹಿಂದಿನಿಂದ ಗುದ್ದಿದ ಪರಿಣಾಮ ಟಿಟಿ ವಾಹನದಲ್ಲಿದ್ದ ಹನ್ನೆರಡು ಜನರು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ನಿಂತಿದ್ದ ಲಾರಿಗೆ ಟಿಟಿ ವಾಹನ ಗುದ್ದಿದ ಪರಿಣಾಮ ಟಿಟಿ ವಾಹನ ಅಪ್ಪಚ್ಚಿಯಂತಾಗಿದ್ದು ವಾಹನದಲ್ಲಿಯ ಮೃತ ದೇಹ ತೆಗೆಯಲು ಪೋಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ.

ಮೃತರು ಶಿವಮೊಗ್ಗ ಜಿಲ್ಲೆಯ ಬದ್ರಾವತಿ ತಾಲೂಕಿನ ಎಮ್ಮಿಗಟ್ಟಿ ಗ್ರಾಮದವರು ಎನ್ನಲಾಗಿದೆ. ಮೃತರು ಮಾಯಮ್ಮ ದೇವಿಯ ದೇವಸ್ಥಾನಕ್ಕೆ ಹೋಗಿ ವಾಪಾಸ್ಸು ಬರುವಾಗ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಉದಯ ವಾರ್ತೆ
ಹಾವೇರಿ


Share to all

You May Also Like

More From Author