ಟಿಟಿ ವಾಹನ ಅಪಘಾತ ಪ್ರಕರಣ..ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷ ಪರಿಹಾರ ಘೋಷಣೆ ಮಾಡಿದ ಸಿಎಂ.
ಹಾವೇರಿ:- ಇಂದು ಬೆಳ್ಳಂ ಬೆಳೆಗ್ಗೆ ನಡೆದ ಭೀಕರ ರಸ್ತೆ ಅಪಘಾತ ಪ್ರಕರಣದಲ್ಲಿ ಹದಿಮೂರು ಜನರು ಸಾವನ್ನಪ್ಪಿದ್ದರು. ಘಟನೆ ವಿವರಣೆ ಪಡೆದ ಸಿಎಂ ಸಂತಾಪ ಸೂಚಿಸುವ ಜೊತೆಗೆ ಮೃತರ ಕುಟುಂಬಕ್ಕೆ ಎರಡು ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪರಶು ರಾಮ್, ಭಾಗ್ಯ, ನಾಗೇಶ್, ವಿಶಾಲಾಕ್ಷಿ, ಅರ್ಪಿತಾ, ಸುಭದ್ರಾ ಬಾಯಿ, ಪುಣ್ಯ, ಮಂಜುಳಾ, ಆದರ್ಶ, ಮಾನಸ, ರೂಪ ಮೃತಪಟ್ಟವರು. ಮೃತದೇಹಗಳನ್ನು ಅವರವರ ಗ್ರಾಮಗಳಿಗೆ ರವಾನಿಸಿದ್ದಾರೆ.
ಉದಯ ವಾರ್ತೆ
ಹಾವೇರಿ