ಅರ್ಚಕ ದೇವಪ್ಪಜ್ಜ‌ ಕೊಲೆ ಪ್ರಕರಣ..ಕೊಲೆ ಪ್ರಕರಣ ಬೇಧಿಸುವಲ್ಲಿ ಪವರ್ ಟಿವಿ ವಿಡಿಯೋ ಜರ್ನಲಿಸ್ಟ್ ಮಹೇಶ ಭೋಜಗಾರ ಪ್ರಮುಖ ಪಾತ್ರ.ಪೋಲೀಸ ಕಮೀಷನರಿಂದ ಕ್ಯಾಮರಾ ಮೆನ್ ಮತ್ತು ವರದಿಗಾರರಿಗೆ ಶ್ಲಾಘನೆ..

Share to all

ಅರ್ಚಕ ದೇವಪ್ಪಜ್ಜ‌ ಕೊಲೆ ಪ್ರಕರಣ..ಕೊಲೆ ಪ್ರಕರಣ ಬೇಧಿಸುವಲ್ಲಿ ಪವರ್ ಟಿವಿ ವಿಡಿಯೋ ಜರ್ನಲಿಸ್ಟ್ ಮಹೇಶ ಭೋಜಗಾರ ಪ್ರಮುಖ ಪಾತ್ರ.ಪೋಲೀಸ ಕಮೀಷನರಿಂದ ಕ್ಯಾಮರಾ ಮೆನ್ ಮತ್ತು ವರದಿಗಾರರಿಗೆ ಶ್ಲಾಘನೆ..

ಹುಬ್ಬಳ್ಳಿ:- ಕಳೆದ ಎರಡು ದಿನಗಳ ಹಿಂದೆ ಹುಬ್ಬಳ್ಳಿಯ ಈಶ್ವರ ನಗರದಲ್ಲಿ ನಡೆದ ವೈಷ್ಣೋದೇವಿ ದೇವಸ್ಥಾನದ ಅರ್ಚಕ ದೇವೇಂದ್ರಪ್ಪನ ಕೊಲೆ ಮಾಡಿದ್ದ ಆರೋಪಿಯನ್ನು ಹಿಡಿಯುವಲ್ಲಿ ಸಹಾಯ ಮಾಡಿದ ಪವರ್ ಟಿವಿ ವರದಿಗಾರ ರವಿಕುಮಾರ ಉಳ್ಳಾಗಡ್ಡಿ ಹಾಗೂ ಕ್ಯಾಮೆರಾ ಮೆನ್ ಮಹೇಶ ಬೋಜಗಾರ ಅವರನ್ನು ಪೋಲೀಸ ಕಮೀಷನರ್ ಸನ್ಮಾನಿಸಿ ಬಹುಮಾನ ನೀಡಿದ್ದಾರೆ.

 

ಆರೋಪಿ ಸಂತೋಷ ಎಂಬಾತ ಸ್ವತ: ಕ್ಯಾಮೆರಾ ಮೆನ್ ಮಹೇಶ ಬೋಜಗಾರಗೆ ಸಂಬಂಧಿಕರಾದರೂ ಸಂಬಂಧವನ್ನು ಲೆಕ್ಕಿಸದೇ ಆರೋಪಿ ಸಂತೋಷನನ್ನು ಪೋಲೀಸರಿಗೆ ಹಿಡಿದು ಕೊಟ್ಟು ಸಾಮಾಜಿಕ ಪ್ರಜ್ಞೆ ಮೆರೆದಿದ್ದಾನೆ.ಮಹೇಶನ ಸಾಮಾಜಿಕ ಪ್ರಜ್ಞೆ ಮತ್ತು ಸಮಯ ಪ್ರಜ್ಞೆಗೆ ಪೋಲೀಸರ ಕಮೀಷನರ್ ಎನ್ ಶಶಿಕುಮಾರ ಹಾಗೂ ಅವರ ತಂಡ ಸನ್ಮಾನಿಸಿ ಬಹುಮಾನ ನೀಡಿ ಗೌರವಿಸಿದ್ದಾರೆ.

ಸಮಾಜದಲ್ಲಿ‌ ಒಳ್ಳೆಯದನ್ನು ಮತ್ತು ಕರ್ತವ್ಯ ಮಾಡಿದವರನ್ನು ಗುರುತಿಸಿ ಸನ್ಮಾನಿಸಿದ ಪೋಲೀಸ ಕಮೀಷನರ್ ಕಾರ್ಯವೈಕರಿಯನ್ನು ಪತ್ರಿಕಾ ರಂಗ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author