ಸಚಿವ ಎಚ್ ಕೆ ಪಾಟೀಲ ಬೆಂಬಲಿಗನಿಗೆ ಒಲಿದು ಬಂತು ಮಹತ್ವದ ಹುದ್ದೆ.ವಾಯವ್ಯ ಕರ್ನಾಟಕ ರಸ್ತೆ ಸಾರಗೆ ಸಂಸ್ಥೆಯ ಉಪಾದ್ಯಕ್ಷನಾಗಿ ಫೀರಸಾಬ.
ಹುಬ್ಬಳ್ಳಿ : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ ಉಪಾಧ್ಯಕ್ಷರಾಗಿ ಗದುಗಿನ ಹಿರಿಯ ಕಾಂಗ್ರೆಸ್ ಮುಖಂಡ ಪೀರಸಾಬ ಕೌತಾಳ ಸರ್ಕಾರದಿಂದ ನೇಮಕಗೊಂಡಿದ್ದಾರೆ.
ಈ ಹಿಂದೆ ಅವಿಭಾಜ್ಯ ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಹೊಣೆ ನಿರ್ವಹಿಸಿದ್ದ ಫೀರಸಾಬ ಕೌತಾಳ,ಗದಗ ಬೆಟಗೇರಿ ನಗರಸಭೆ ಅಧ್ಯಕ್ಷರಾಗಿಯೂ ಅತ್ಯುತ್ತಮವಾಗಿ ಕಾರ್ಯ ಮಾಡಿದ್ದಾರೆ.
ಸಚಿವ ಎಚ್.ಕೆ.ಪಾಟೀಲರ ನಿಕಟವರ್ತಿಯಾದ ಇವರು ಗದುಗಿನಲ್ಲಿ ಪ್ರತಿ ವರ್ಷ ಭಾವೈಕ್ಯತೆ ಉತ್ಸವ ಹಮ್ಮಿಕೊಳ್ಳುತ್ತಾ ಮಾದರಿ ಸಮಾರಂಭ, ಸಾಮೂಹಿಕ ವಿವಾಹ ಏರ್ಪಡಿಸುತ್ತಾ ಇತರರಿಗೆ ಮಾದರಿಯಾಗಿದ್ದಾರೆ.
ಅಂತಹ ಭಾವೈಕ್ಯತೆಯ ಹರಿಕಾರನಿಗೆ ಈಗ ಎನ್ ಡಬ್ಲು ಕೆ ಎಸ್ ಆರ್ ಟಿ ಸಿ ಉಪಾದ್ಯಕ್ಷ ಸ್ಥಾನ ಒಲಿದು ಬಂದಿದ್ದು ಇಂದು ಸಾಯಂಕಾಲ ಅಧಿಕಾರವಹಿಸಿಕೊಳ್ಳಲಿದ್ದಾರೆ.