ಉದ್ಯಮಿಗೆ ಬೆದರಿಕೆ ಆರೋಪ: ಶೀಘ್ರವೇ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅರೆಸ್ಟ್!?

Share to all

ಬೆಂಗಳೂರು:- ಎಲೆಕ್ಷನ್ ಗೆ 50 ಕೋಟಿ ಹಣ ಕೊಡುವಂತೆ ಬೆದರಿಕೆ ಹಾಕುವ ಎಚ್ಚರಿಕೆ ನೀಡಿದ ಆರೋಪದಡಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಉದ್ಯಮಿ ಓರ್ವರು ದೂರು ಕೊಟ್ಟಿದ್ದರು. ಹೀಗಾಗಿ ಕುಮಾರಸ್ವಾಮಿ ವಿರುದ್ಧ ಬಿಎನ್​ಎಸ್ ಸೆಕ್ಷನ್ 3(5), 308(2), 351(2) ಅಡಿಯಲ್ಲಿ ಕೇಸ್ ದಾಖಲಾಗಿದೆ. 308 ಬಿಎನ್ಎಸ್ ಸೆಕ್ಷನ್​ ಅಂದ್ರೆ ಸುಲಿಗೆ ಆರೋಪ‌ ಪ್ರಕರಣವಾಗಿದೆ. ಇದು ನಾನ್ ಬೇಲಬಲ್ ಸೆಕ್ಷನ್ ಆಗಿದ್ದು ಬಂಧನ ಮಾಡಬಹುದು. 351 – ಕ್ರಿಮಿನಲ್ ಬೆದರಿಕೆ ಆರೋಪ, ಇದು ಬೇಲಬಲ್ ಸೆಕ್ಷನ್ ಆಗಿದೆ.

ಈ ಸೆಕ್ಷನ್​ ಅಡಿಯಲ್ಲಿ ಎರಡು ವರ್ಷದ ತ‌ನಕ ಶಿಕ್ಷೆ ವಿಧಿಸಬಹುದು. 3(5) ಸಮಾನ ಉದ್ದೇಶ ಹೊಂದಿರುವ ಇಬ್ಬರು ಆರೋಪಿಗಳಿಗೆ ಸಂಬಂಧಿಸಿದ್ದಾಗಿ. ಇದರ ಅಡಿಯಲ್ಲಿ ನೇರವಾಗಿ ಬಂಧನ ಸಾಧ್ಯವಿಲ್ಲ. ಮೊದಲು 7 ದಿನಗಳಲ್ಲಿ ವಿಚಾರಣೆಗೆ ನೊಟೀಸ್ ನೀಡಬೇಕು. ವಿಚಾರಣೆಗೆ ಬರದಿದ್ದಾಗ ಬಂಧನ ಮಾಡುವ ಸಾಧ್ಯತೆ ಇರುತ್ತದೆ. ಸದ್ಯ ಪ್ರಕರಣದಲ್ಲಿ ಕುಮಾರಸ್ವಾಮಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ.

ಇನ್ನು ತಮ್ಮ ವಿರುದ್ಧ ಕೇಸ್​ ಪ್ರಶ್ನಿಸಿ ಕುಮಾರಸ್ವಾಮಿ ಹೈಕೋರ್ಟ್ ಕದ ತಟ್ಟುವ ಸಾಧ್ಯತೆ ಇದೆ. ದೆಹಲಿಯಲ್ಲಿರುವ ಕೇಂದ್ರ ಸಚಿವರು, ಬೆಂಗಳೂರಿಗೆ ಬಂದ ಬೆನ್ನಲ್ಲೇ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ. ಫೋನ್ ಮೂಲಕ ಹೆಚ್​ಡಿಕೆ ಬೆದರಿಕೆ ಹಾಕಿರುವ ಆರೋಪ ಇದೆ. ಪ್ರಕರಣ ದಾಖಲು ಮಾಡಿಕೊಳ್ಳುವ ವಿಚಾರದಲ್ಲಿ ಬೆಂಗಳೂರಿನ ಅಮೃತಹಳ್ಳಿ ಠಾಣೆ ಪೊಲೀಸರು ಯಡವಿದ್ದಾರೆ. ಬೆಳಗ್ಗೆ ಎನ್​​​​ಸಿಆರ್ ಮಾಡಿ, ಸಂಜೆ ಎಫ್ಐಆರ್ ಮಾಡಿದ್ದಾರೆ. ಬೆಳಗ್ಗೆ ಗಂಭೀರವಲ್ಲದ ಪ್ರಕರಣ ಮತ್ತು ಸಂಜೆ ಗಂಭೀರ ಕೇಸ್ ಎಂದು ದಾಖಲಿಸಿಕೊಂಡಿದ್ದಾರೆ. ಒತ್ತಡಕ್ಕೆ ಮಣಿದು FIR ದಾಖಲಿಸಿದ ಆರೋಪ ಮಾಡಬಹುದು. ಈ ಅಂಶಗಳು ಪ್ರಶ್ನಿಸಿ ಕುಮಾರಸ್ವಾಮಿ ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ.


Share to all

You May Also Like

More From Author