ರಾಮನಗರ: 2 ಚುನಾವಣೆಗಳಲ್ಲಿ ಕುತಂತ್ರದಿಂದ ಸೋಲಿಸಿದ್ರು, ನನಗೆ ಈಗ ಒಂದು ಅವಕಾಶ ಕೊಡಿ ಎಂದುಚನ್ನಪಟ್ಟಣ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, 2 ಚುನಾವಣೆಗಳಲ್ಲಿ ನನ್ನನ್ನ ಕುತಂತ್ರದಿಂದ ಸೋಲಿಸಿದ್ರು. ರಾಮನಗರದಲ್ಲಿ ಗಿಫ್ಟ್ ಕೊಟ್ಟಿ ಸೋಲಿಸಿದ್ರು.
ಈಗಲೂ ರಾತ್ರಿ 4 ಗಂಟೆಗೆ ಬಂದು ಕೂಪನ್ ಕೊಡಬಹುದು. ರೆಷನ್ ಕಾರ್ಡ್ ಕೂಪನ್ ಕೊಡ್ತಾರೆ, ಇದು ಕಾಂಗ್ರೆಸ್ ನಾಯಕರ ಗಿಫ್ಟಾ? ನನಗೆ ಈಗ ಒಂದು ಅವಕಾಶ ಕೊಡಿ ಎಂದು ನಿಖಿಲ್ ಮನವಿ ಮಾಡಿದ್ರು. ನೀರಾವರಿ ಯೋಜನೆಗೆ ಭದ್ರಬುನಾದಿ ಹಾಕಿರೋದು ಮಾಜಿ ಪ್ರಧಾನಿ ದೇವೇಗೌಡರು. ಸತ್ಯಗಾಲ ಮಂಚಿನಬೇಲಿ ಸೇರಿದಂತೆ ಹಲವು ಹಳ್ಳಿಗಳಿಗೆ ಶಾಶ್ವತ ನೀರಾವರಿ ಯೋಜನೆ ಮಾಡಬೇಕಂತ ಕುಮಾರಸ್ವಾಮಿ ಅವರನ್ನ ಆಯ್ಕೆ ಮಾಡಿದರು.
ಅದಕ್ಕಾಗಿಯೇ ಕುಮಾರಣ್ಣ ಅವರು ರಾಮನಗರಕ್ಕೆ ರಾಜೀನಾಮೆ ಕೊಟ್ಟು ಚನ್ನಪಟ್ಟಣ ಉಳಿಸಿಕೊಂಡರು. ಹಾಸನದಲ್ಲಿ ಹುಟ್ಟಿದ್ದಾರೆ ರಾಮನಗರಕ್ಕೆ ಏನ್ ಸಂಬಂದ ಅಂತ ವಿರೋಧಿಗಳು ಹೇಳ್ತಾರೆ. ಅಧಿಕಾರ ಇರಲಿ ಬಿಡಲಿ ಜನರ ಸಂಪರ್ಕ ಹೊಂದಿದ್ದೇವೆ. ರಾಮನಗರ ಜಿಲ್ಲಾದ್ಯಂತ ಅನೇಕ ಕಾಮಾಗಾರಿಗಳು ಕುಮಾರಣ್ಣನ ಕಾಲದಲ್ಲಿ ಆಗಿದೆ ಎಂದು ಸಾಧನೆಗಳನ್ನು ಬಣ್ಣಿಸಿದರು.