ಊಟ ಮುಗಿಸಿ ವಾಕಿಂಗ್ ಹೋಗಿದ್ದಕ್ಕೆ ಕಲ್ಲಿನಿಂದ ಹಲ್ಲೆ ಮಾಡಿದ ಪುಡಿರೌಡಿಗಳು.ಹೆಚ್ಚಾದ ಪುಡಿರೌಡಿಗಳ ಹಾವಳಿ; ಊಟ ಮುಗಿಸಿ ವಾಕಿಂಗ್ ಹೋಗಿದ್ದಕ್ಕೆ ಕಲ್ಲಿನಿಂದ ಹಲ್ಲೆ.

Share to all

ಊಟ ಮುಗಿಸಿ ವಾಕಿಂಗ್ ಹೋಗಿದ್ದಕ್ಕೆ ಕಲ್ಲಿನಿಂದ ಹಲ್ಲೆ ಮಾಡಿದ ಪುಡಿರೌಡಿಗಳು.ಹೆಚ್ಚಾದ ಪುಡಿರೌಡಿಗಳ ಹಾವಳಿ; ಊಟ ಮುಗಿಸಿ ವಾಕಿಂಗ್ ಹೋಗಿದ್ದಕ್ಕೆ ಕಲ್ಲಿನಿಂದ ಹಲ್ಲೆ.

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮತ್ತೆ ಪುಡಿರೌಢಿಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿ ಊಟ ಮುಗಿಸಿ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯ ಮೇಲೆ, ಮಾರಣಾಂತಿಕವಾಗಿ ಹಲ್ಲೇ ಮಾಡಿರುವ ಘಟನೆ ಮಂಟೂರು ರಸ್ತೆಯ ಗಾಂಧಿ ಏಕ್ತಾ ಕಾಲೋನಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಗೈಬುಖಾನ್ ಅಕ್ಕಿಂ (29) ಎಂಬಾತನ ಮೇಲೆ ಹಲ್ಲೇ ಮಾಡಲಾಗಿದ್ದು, ಮಣಿಕಂಠ, ಸಾಹಿಲ್, ಮತ್ತೊಬ್ಬ ಸೇರಿಕೊಂಡು ಗಾಂಜಾ, ಎಣ್ಣೆ ನಶೆಯಲ್ಲಿ ಸುಖಾ ಸುಮ್ಮನೆ ಏಕಾಏಕಿ ತಂಟೆ ತೆಗೆದು ಕಾಲಿನಿಂದ ಒದ್ದು, ಕೆಳಗೆ ಬಿಳಿಸಿ, ಕಲ್ಲಿನಿಂದ ಹಲ್ಲೇ ಮಾಡಿದ್ದಾರೆ. ಪರಿಣಾಮ ಗೈಬುಖಾನ್’ಗೆ ಗಂಭೀರವಾಗಿ ಗಾಯಗಳಾಗಿದ್ದು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

 

https://youtu.be/YSSzMAxRFOc?si=L6iZIX6Mb1Xfrs81

 

ಇನ್ನು ಪುಂಡರ ಅಟ್ಟಹಾಸದ ದೃಶ್ಯಗಳು ಅಲ್ಲಿಯೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಕಡಿವಾಣ ಹಾಕಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಬಗ್ಗೆ ಬೆಂಡಿಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆ ಮೂವರ ಮೇಲೆ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ.

ಉದಯ ವಾರ್ತೆ ಹುಬ್ಬಳ್ಳಿ.


Share to all

You May Also Like

More From Author