ಎಡಗೈ ವೇಗಿಯ ಲೈಫ್ ಬದಲಿಸಿದ RCB: ಕಷ್ಟದಲ್ಲಿ ನೆರವಾದ ತಂಡ ನೆನೆದ ಯಶ್ ದಯಾಳ್!

Share to all

ಬಾಂಗ್ಲಾದೇಶ ಟೆಸ್ಟ್​​​​ ಸರಣಿಗೆ ಬಿಸಿಸಿಐ ಆಯ್ಕೆ ಸಮಿತಿ 16 ಸದಸ್ಯರ ಬಲಿಷ್ಠ ತಂಡವನ್ನ ಪ್ರಕಟಿಸಿದೆ. ಆಯ್ಕೆಗಾರರು ಹೆಚ್ಚು ಪ್ರಯೋಗಕ್ಕೆ ಮುಂದಾಗಿಲ್ಲ. ಬಹುತೇಕ ಇಂಗ್ಲೆಂಡ್​​​ ಸರಣಿಯಲ್ಲಿ ಆಡಿದ ಆಟಗಾರರೇ ಟೆಸ್ಟ್​​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಈ 16 ಆಟಗಾರರ ಪೈಕಿ ಒಬ್ಬರ ಸರ್​ಪ್ರೈಸ್​ ಆಯ್ಕೆ ನಡೆದಿದೆ. ಯಂಗ್ ಬೌಲರ್​​​​ ಭಾರತ ತಂಡದಲ್ಲಿ ಮೊದಲ ಬಾರಿ ಅವಕಾಶ ಪಡೆದಿದ್ದು ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ದರ್ಬಾರ್​​​ ನಡೆಸಲು ಮುಂದಾಗಿದ್ದಾರೆ.

ಪ್ರತಿಯೊಬ್ಬ ಕ್ರಿಕೆಟಿಗನ​​​ ಬಿಗ್ ಡ್ರೀಮ್​​​​ ಅಂದ್ರೆ ಟೀಮ್ ಇಂಡಿಯಾ ಪ್ರತಿನಿಧಿಸೋದು. ವೇಗಿ ಯಶ್​​​ ದಯಾಳ್ ಕೂಡ​​ ಅಂತಹದ್ದೇ ಕನಸು ಕಂಡಿದ್ರು. ಇದೀಗ ಉತ್ತರ ಪ್ರದೇಶ ವೇಗಿಯ ಆ ಡ್ರೀಮ್​​ ಕನಸಾಗೋ ಟೈಮ್ ಬಂದಿದೆ. ಬಾಂಗ್ಲಾ ಟೆಸ್ಟ್​ ಸರಣಿಗೆ ಆಯ್ಕೆಯಾಗಿರೋ ಯಶ್​​ ದಯಾಳ್​​​​, ಡೆಬ್ಯು ನಿರೀಕ್ಷೆಯಲ್ಲಿದ್ದಾರೆ. ವರ್ಷದ ಹಿಂದೆ ಖಳನಾಯಕನಾಗಿ ಗುರುತಿಸಿಕೊಂಡಿದ್ದ ಇದೇ ದಯಾಳ್​​, ಇದೀಗ ಭಾರತ ತಂಡದಲ್ಲಿ ಸ್ಥಾನ ಪಡೆದು ಭಲೇ ಅನ್ನಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಆರ್​​ಸಿಬಿ. ರೆಡ್​ ಆರ್ಮಿ ತೆಗೆದುಕೊಂಡ ಆ ಒಂದು ನಿರ್ಧಾರ ಯುವವೇಗಿ ಕ್ರಿಕೆಟ್ ಲೈಫ್​​ಅನ್ನೇ ಬದಲಿಸಿದೆ.

ಯಶ್​ ದಯಾಳ್​​​​​ ಇಂದು ಟಿಮ್ ಇಂಡಿಯಾಗೆ ಸೆಲೆಕ್ಟ್​ ಆಗಿದ್ದಾರೆ ಅಂದ್ರೆ ಅದಕ್ಕೆ ಐಪಿಎಲ್​ನ ಆರ್​ಸಿಬಿ ತಂಡಕ್ಕೆ ಬಿಗ್ ಥ್ಯಾಂಕ್ಸ್​ ಹೇಳಲೇಬೇಕು. 6,6,6,6,6.. ರಿಂಕು ಸಿಂಗ್​ ಅನ್ನೋ ಬ್ಯಾಟಿಂಗ್ ಸುನಾಮಿ 2023ರ ಐಪಿಎಲ್​​​ನಲ್ಲಿ ಸತತ 5 ಸಿಕ್ಸ್​ ಚಚ್ಚಿ ಸೆನ್ಷೆಷನ್ ಸೃಷ್ಟಿಸಿದ್ರು. ಇದರಿಂದ ರಿಂಕು ಸಿಂಗ್​​​ ಏನೋ ಹೀರೋ ಆದ್ರು. ಆದರೆ ವಿಲನ್ ಆಗಿದ್ದು ಬೌಲರ್​​ ಯಶ್​ ದಯಾಳ್​​. ಬರೀ ಖಳನಾಯಕ ಅಷ್ಟೇ ಅಲ್ಲ. ಅವರ ಕರಿಯರ್​​​ಗೆ ದೊಡ್ಡ ಡ್ಯಾಮೇಜ್​​​ ಆಯ್ತು. ಸಾಕಷ್ಟು ನಿಂದನೆ ಜೊತೆ ಅಪಮಾನ ಎದುರಿಸಿದ್ರು.

ಇದರಿಂದ ಹೊರಬರಲಾಗದೇ ಮಾನಸಿಕ ಖಿನ್ನತೆಗೆ ತುತ್ತಾದ್ರು. 7 ರಿಂದ 8 ಕೆಜಿ . ತೂಕ ಕಳೆದುಕೊಂಡ್ರುಹಲವು ತಿಂಗಳ ಕಾಲ ಸ್ಫರ್ಧಾತ್ಮಕ ಕ್ರಿಕೆಟ್​ನಿಂದ ದೂರ ಸರಿದ್ರು. ಈ ಆಘಾತದ ನಡುವಲ್ಲೆ 5 ಸಿಕ್ಸರ್​​​​ ಚಚ್ಚಿಸಿಕೊಂಡ ಯಶ್ ದಯಾಳ್​ರನ್ನ ಗುಜರಾತ್ ಟೈಟನ್ಸ್​ ತಂಡ ರಿಲೀಸ್​​​​​​​​ ಮಾಡಿ ಬಿಗ್​ ಶಾಕ್​​​​ ನೀಡ್ತು.

ಘಟನೆಯಿಂದ ದಯಾಳ್​ ಮಾನಸಿಕವಾಗಿ ಜರ್ಝರಿತವಾದ್ರು. ಇನ್ನೇನು ಕ್ರಿಕೆಟ್​ ಲೈಫ್​ ಕೊನೆಯಾಯ್ತು ಅನ್ನೋವಾಗ ಅವರ ಬದುಕಿಗೆ ಬೆಳಕಾಗಿದ್ದು ಸಂಕಷ್ಟದಲ್ಲಿ ಆಸರೆಯಾಗಿದ್ದು ಇದೇ ಆರ್​ಸಿಬಿ ತಂಡ. ಹೌದು, ಐದು ಸಿಕ್ಸರ್ ಹೊಡೆಸಿಕೊಂಡು ಮಾನಸಿಕ ಖಿನ್ನತೆಗೆ ಒಳಗಾದ ಎಡಗೈ ವೇಗಿಯನ್ನ 2024ರ ಹರಾಜಿನಲ್ಲಿ 5 ಕೋಟಿ ರೂಪಾಯಿ ನೀಡಿ ಖರೀದಿಸ್ತು. ಆರ್​ಸಿಬಿಯ ಈ ನಿರ್ಧಾರ ದಯಾಳ್​ ಬದುಕಿಗೆ ಹೊಸ ತಿರುವು ನೀಡ್ತು.

ಕಳೆದ ಐಪಿಎಲ್​ನಲ್ಲಿ ಆರ್​ಸಿಬಿ ಪರ ಕಣಕ್ಕಿಳಿದ ಯಶ್​ ದಯಾಳ್​​​ ಫಸ್ಟ್​ ಹಾಫ್​​ನಲ್ಲಿ ಸಾಧಾರಣ ಪ್ರದರ್ಶನ ನೀಡಿದ್ರು. ಆದ್ರೂ ಮ್ಯಾನೇಜ್​​ಮೆಂಟ್​​ ಬ್ಯಾಕ್ ಮಾಡ್ತು. ಸೆಕೆಂಡ್​​ ಹಾಫ್​​​ನಲ್ಲಿ ಬೌನ್ಸ್​ಬ್ಯಾಕ್​​ 14 ವಿಕೆಟ್ ಕಬಳಿಸಿ ಶೈನ್ ಆದ್ರು. ಪ್ರಸಕ್ತ ದುಲೀಪ್ ಟ್ರೋಫಿಯ ಮೊದಲ ಪಂದ್ಯದಲ್ಲೆ 4 ವಿಕೆಟ್​ ಕಬಳಿಸಿ ಕಮಾಲ್ ಮಾಡಿದ್ರು. ಇದರಿಂದ ಇಂಪ್ರೆಸ್​​ ಆದ ಬಿಸಿಸಿಐ ಆಯ್ಕೆ ಸಮಿತಿ ಬಾಂಗ್ಲಾ ಟೆಸ್ಟ್​ ಸರಣಿಗೆ ಸೆಲೆಕ್ಟ್ ಮಾಡಿದೆ.


Share to all

You May Also Like

More From Author