ಬೆಳಗಾವಿ: ರಸ್ತೆ ಬದಿ ನಿಂತಿದ್ದ ಬಾಲಕನ ಮೇಲೆ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಹರಿದು ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ. ಸುನೀಲ್ ಬಂಡರಗರ್ (10 ವರ್ಷ) ಮೃತ ದುರ್ದೈವಿ. ಸುನೀಲ್ ಬಂಡರಗರ್ ಅಥಣಿ ಪಟ್ಟಣದಲ್ಲಿನ ಗಲಗಲಿ ಆಸ್ಪತ್ರೆ ಬಳಿಯ ಟ್ಯೂಷನ್ಗೆ ಬಂದಿದ್ದನು. ಟ್ಯೂಷನ್ ಮುಗಿಸಿ ಮೂತ್ರ ವಿಸರ್ಜನೆಗೆಯಂದು ಸುನೀಲ್ ಬಂಡರಗರ್ ಗೆಳೆಯರ ಜೊತೆ ರಸ್ತೆ ಬದಿ ನಿಂತಿದ್ದನು.
ಈ ವೇಳೆ ಅಥಣಿಯಿಂದ ಕಾರವಾರಕ್ಕೆ ಹೊರಟಿದ್ದ ಸರ್ಕಾರಿ ಬಸ್ ಹುಡುಗರ ಮೇಲೆ ಬರುತ್ತಿತ್ತು. ಇದನ್ನು ಗಮನಿಸಿದ ಸುನೀಲ್ ಬಂಡರಗರ್ ಗೆಳೆಯರು ಹಿಂದಕ್ಕೆ ಸರಿದಿದ್ದಾರೆ. ಆದರೆ, ಸುನೀಲ್ ಬಂಡರಗರ್ ಹಿಂದೆ ಸರೆಯುವಷ್ಟರಲ್ಲಿ ಬಸ್ ಹರಿದಿದೆ. ಚಾಲಕನ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.