ಮುಕ್ತಾಯದ ಹಂತಕ್ಕೆ ಬಂದ ದುಲೀಪ್ ಟ್ರೋಫಿ: ದಾಖಲೆ ಬ್ಯಾಟಿಂಗ್ ಮಾಡಿದ ಕೊಹ್ಲಿ ಆಪ್ತ!

Share to all

ದೇಶೀಯ ಕ್ರಿಕೆಟ್​ ದುಲೀಪ್​ ಟ್ರೋಫಿ ಮುಕ್ತಾಯದ ಹಂತಕ್ಕೆ ಬಂದಿದ್ದು, ಟೀಮ್​ ಇಂಡಿಯಾದ ಯುವ ಬ್ಯಾಟರ್ ಕನ್ನಡಿಗ ದಾಖಲೆ ಬ್ಯಾಟಿಂಗ್ ಮಾಡಿದ್ದಾರೆ.

ಅನಂತಪುರ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಇಂಡಿಯಾ ಎ ಮತ್ತು ಇಂಡಿಯಾ ಡಿ ಮಧ್ಯೆ ಮಹತ್ವದ ಪಂದ್ಯ ನಡೆಯುತ್ತಿದೆ. ಇದು ದುಲೀಪ್​​ ಟ್ರೋಫಿ ಟೂರ್ನಿಯಲ್ಲೇ ಮಹತ್ವದ ಪಂದ್ಯ ಆಗಿದ್ದು, ಇಂಡಿಯಾ ಡಿ ಪರ ಕನ್ನಡಿಗ ದೇವದತ್​​ ಪಡಿಕ್ಕಲ್​​ ಮಿಂಚಿದ್ದಾರೆ.

ಮಹತ್ವದ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಕ್​ ಟು ಬ್ಯಾಕ್​ ವಿಕೆಟ್​​​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಇಂಡಿಯಾ ಡಿ ತಂಡಕ್ಕೆ ಪಡಿಕ್ಕಲ್​ ಆಸರೆಯಾದ್ರು. ಕೊನೆವರೆಗೂ ಕ್ರೀಸ್​ನಲ್ಲೇ ನಿಂತು ತಾಳ್ಮೆಯ ಬ್ಯಾಟಿಂಗ್​ ಮಾಡಿದ್ರು.

ಇಂಡಿಯಾ ಎ ಬೌಲರ್​ಗಳ ಬೆಂಡೆತ್ತಿದ ಟೀಮ್​ ಇಂಡಿಯಾದ ಯುವ ಬ್ಯಾಟರ್​​​ ಪಡಿಕ್ಕಲ್​ 124 ಬಾಲ್​ನಲ್ಲಿ 92 ರನ್​ ಚಚ್ಚಿ ಶತಕ ವಂಚಿತರಾದ್ರು. ಬರೋಬ್ಬರಿ 15 ಫೋರ್​ ಸಿಡಿಸಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​​ ರೇಟ್​​ 75ಕ್ಕೂ ಹೆಚ್ಚಿತ್ತು.

ಇತ್ತೀಚೆಗಷ್ಟೇ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್​​ ಸರಣಿ ಮೊದಲ ಪಂದ್ಯಕ್ಕೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟವಾಗಿದೆ. ಈ ತಂಡದಲ್ಲಿ ಪಡಿಕ್ಕಲ್​​ಗೆ ಸ್ಥಾನ ಸಿಕ್ಕಿಲ್ಲ. ಹಾಗಾಗಿ ಮುಂದಿನ ಟೆಸ್ಟ್​​ ಪಂದ್ಯಕ್ಕೆ ಕನ್ನಡಿಗನಿಗೆ ಸ್ಥಾನ ಸಿಗಬಹುದು ಎಂದು ತಿಳಿದು ಬಂದಿದೆ.


Share to all

You May Also Like

More From Author